ಬಹು ನಿರೀಕ್ಷಿತ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜಯಣ್ಣ ಕಂಬೈನ್ಸ್ ಅವರ ಪವನ್ ವಡೆಯರ್ ನಿರ್ದೇಶನದ ಸಿನಿಮಾ ‘ಧೀರ ರಣ ವಿಕ್ರಮ’ ಕೆಲವು ಮಾತಿನ ಭಾಗ ಹಾಗೂ ಹಾಡಿಗಾಗಿ ಇಟಲಿ ದೇಶವನ್ನು ಸುತ್ತಿ ಬರಲಿದೆ. ಇತ್ತೀಚಿಗೆ ಬಳ್ಳಾರಿ ಅಲ್ಲಿ ರೈಲ್ವೇ ಸ್ಟೇಷನ್ ಸನ್ನಿವೇಶದಲ್ಲಿ ಹಲವಾರು ಭೋಗಿಗಳನ್ನು ರಚಿಸಿ 80 ಲಕ್ಷ ವೆಚ್ಚದಲ್ಲಿ ಭರ್ಜರಿ ಕ್ಲೈಮಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ರವಿ ವರ್ಮ ಅವರು ಈ ವಿನೂತನ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಿಕೊಂಡರು.
ನಿರ್ದೇಶಕ ಪವನ್ ವಡೆಯರ್ ಅವರು ಬೆಂಗಳೂರು, ಹಂಪಿ, ಮೆಟ್ರೊ ಟ್ರೈನ್, ತುಂಗಭದ್ರ ನದಿ ದಂಡೆ ಹಾಗೂ ಇನ್ನಿತರ ಸ್ಥಳಗಳಲ್ಲಿ 80ಕ್ಕೂ ಅಧಿಕ ದಿವಸಗಳ ಚಿತ್ರೀಕರಣ ಮಾಡಿದ್ದಾರೆ.
ಜಯಣ್ಣ ಹಾಗೂ ಭೋಗೇಂದ್ರ ಅವರ ಮತ್ತೊಂದು ಮಹೋನ್ನತ ಚಿತ್ರ ವೈಧಿ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ, ಸುರೇಶ್ ಅವರ ಸಂಕಲನ, ರವಿ ವರ್ಮ ಅವರ ಸಾಹಸ ಒಳಗೊಂಡಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾರಾಗಿ ಅಂಜಲಿ ಹಾಗೂ ಆದ ಶರ್ಮ ಇದ್ದಾರೆ, ಹಿಂದಿ ಸಿನಿಮಾದ ಪ್ರಖ್ಯಾತ ಖಳ ನಟ ವಿಕ್ರಮ್ ಸಿಂಗ್, ಪೋಷಕ ಪಾತ್ರಗಳಲ್ಲಿ ದಿನೇಷ್ ಮಂಗಳೂರು, ಮುಖ್ಯಮಂತ್ರಿ ಚಂದ್ರು, ಡಾಕ್ಟರ್ ಗಿರೀಷ್ ಕಾರ್ನಾಡ್,ಅವಿನಾಷ್, ರಂಗಾಯಣ ರಘು, ಅಶೋಕ್, ಸುಧ ಬೆಳವಾಡಿ, ಶ್ರೀಧರ್ ಕೇಸರಿ, ಲಕ್ಷ್ಮಣ್ ರವಿವರ್ಮಾ ಹಾಗೂ ಇತರರು ಇದ್ದಾರೆ.